ನಿರಂತರ ಅತ್ಯಾಚಾರಕ್ಕೊಳಗಾಗುತ್ತಿದ್ದ ಯುವತಿಯೊಬ್ಬರು ಆ ವ್ಯಕ್ತಿಯ ಮರ್ಮಾಂಗವನ್ನು ಕತ್ತರಿಸಿದ ಪ್ರಕರಣ ಕೇರಳದಲ್ಲಿ ನಡೆದಿರುವುದು ವರದಿಯಾಗಿದೆ (ಪ್ರ.ವಾ., ಮೇ 21).
‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎಂಬಂತೆ, ಉಪಟಳ ತಡೆಯಲು ಸಂಕಲನ, ವ್ಯವಕಲನ, ಗುಣಾಕಾರ ಹೀಗೆಲ್ಲಾ ಲೆಕ್ಕ ಹಾಕಿ ಕೊನೆಗೆ ಈ ಸಮಸ್ಯೆಯ ವರ್ಗಮೂಲವಾದ ಮರ್ಮಾಂಗದ ‘ಭಾಗಾ’ಕಾರವೇ ಸೂಕ್ತವೆನಿಸಿ, ಅದನ್ನು ಕತ್ತರಿಸಿ ಪೊಲೀಸರಿಗೆ ಶರಣಾಗಿದ್ದಾರೆ ಆ ಯುವತಿ.
ಈ ಅಪರೂಪದ ಸಾಹಸಕ್ಕೆ ಮುಖ್ಯಮಂತ್ರಿಗಳಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಆದರೂ, ಕಾನೂನನ್ನು ಕೈಗೆ ತೆಗೆದುಕೊಂಡ ಕಾರಣ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವುದು ನಿಶ್ಚಿತ. ನ್ಯಾಯಾಲಯದಲ್ಲಿ ವಕೀಲರ ಎಂಥೆಂಥ ಮುಜುಗರದ ಪ್ರಶ್ನೆಗಳನ್ನು ಆ ಯುವತಿ ಎದುರಿಸಬೇಕಾಗುತ್ತದೆಯೋ?
ವೆಂಕಟೇಶ ಮುದಗಲ್, ಕಲಬುರ್ಗಿ