‘ಮಧ್ಯಂತರ ಅವಧಿಯಲ್ಲಿ ಷೇರುಪೇಟೆ ವಹಿವಾಟಿನ ಮೇಲೆ ಜಾಗತಿಕ ವಿದ್ಯಮಾನಗಳ ಪ್ರಭಾವ ಹೆಚ್ಚರಲಿದೆ. ಯಾವುದೇ ಅಡ್ಡಿಯಾಗದಂತೆ ಜಿಎಸ್ಟಿಯನ್ನು ಜಾರಿಗೊಳಿಸುವುದು ಸದ್ಯಕ್ಕೆ, ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ’ ಎಂದು ಸ್ಯಾಮ್ಕೊಲ ಸೆಕ್ಯುರಿಟೀಸ್ನ ಸಿಇಒ ಜಮೀತ್ ಮೋದಿ ಹೇಳಿದ್ದಾರೆ.
4ನೇ ತ್ರೈಮಾಸಿಕ: ತ್ರೈಮಾಸಿಕ ಫಲಿತಾಂಶದಲ್ಲಿ ಟಾಟಾ ಮೋಟಾರ್ಸ್, ಐಟಿಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಟೆಕ್ ಮಹೀಂದ್ರಾ ಮತ್ತು ಸನ್ ಫಾರ್ಮಾ ಕಂಪೆನಿಗಳ ಆರ್ಥಿಕ ಸಾಧನೆಗಳು ಈ ವಾರವೇ ಹೊರಬೀಳಲಿವೆ. ಇದರ ಜತೆಗೆ ರೂಪಾಯಿ ಮೌಲ್ಯದಲ್ಲಿ ಏರಿಳಿತ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವವೂ ಸೂಚ್ಯಂಕಗಳ ಏರಿಳಿತವನ್ನು ನಿರ್ಧರಿಸಲಿವೆ ಎಂದು ಹೇಳಿದ್ದಾರೆ.
*
ವಾಯಿದಾ ವಹಿವಾಟು ಇರುವುದರಿಂದ ಈ ವಾರ ಷೇರುಪೇಟೆಯಲ್ಲಿ ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆಯಲಿದೆ.
ಎಫ್. ಪಾರೇಖ್
ಬೋನಾಂಜಾ ಪೋರ್ಟ್ಫೋಲಿಯೊ ಸಂಸ್ಥೆಯ ವಿಶ್ಲೇಷಕ
*
ಜಿಎಸ್ಟಿಯಿಂದ ಷೇರುಪೇಟೆಯಲ್ಲಿ ಸಕಾರಾತ್ಮಕ ಚಟುವಟಿಕೆ ನಡೆಯಲಿದೆ. ಎಫ್ಎಂಸಿಜಿ ಮತ್ತು ಲೋಹ ವಲಯದ ಷೇರುಗಳು ಹೆಚ್ಚು ಗಳಿಕೆ ಕಂಡುಕೊಳ್ಳುವ ನಿರೀಕ್ಷೆ ಇದೆ.
ನಿತಾಶಾ ಶಂಕರ್,
ಉಪಾಧ್ಯಕ್ಷ, ಯೆಸ್ ಸೆಕ್ಯುರಿಟೀಸ್ ಇಂಡಿಯಾ