ಹಿರಿಯೂರು: ನಗರದ ನವನಗರ ಬಡಾವಣೆಯ ಕೆಲವರು ಶೌಚದ ಗುಂಡಿ ನಿರ್ಮಿಸಿಕೊಳ್ಳದೆ ಪೈಪ್ ಲೈನ್ ಮೂಲಕ ತ್ಯಾಜ್ಯವನ್ನು ನೇರವಾಗಿ ವೇದಾವತಿ ನದಿಗೆ ಬಿಡುತ್ತಿರುವ ಕಾರಣ ಜನ–ಜಾನುವಾರುಗಳಿಗೆ ತೊಂದರೆಯಾಗಿದೆ ಎಂದು ವಾರ್ಡ್ನ ನಗರ ಸಭಾ ಸದಸ್ಯ ಎಸ್ಪಿಟಿ ದಾದಾಪೀರ್ ಸುದ್ದಿಗಾರರಿಗೆ ತಿಳಿಸಿದರು.
ಸ್ಥಳೀಯ ನಿವಾಸಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.