ಯಾದಗಿರಿ: ಕೋಲಿ ಸಮಾಜದ ವಿಭಾಗೀಯ ಸಮಾವೇಶ ಅಂಗವಾಗಿ ಭಾನುವಾರ ನಗರಕ್ಕೆ ಬಂದ ಅಂಬಿಗರ ಚೌಡಯ್ಯ ಜ್ಯೋತಿಯಾತ್ರೆಯನ್ನು ಸ್ವಾಗತಿಸಲಾಯಿತು.
ಬೆಳಿಗ್ಗೆ ಯಾನಾಗುಂದಿಯಿಂದ ಯಾತ್ರೆ ಆರಂಭಗೊಂಡು ಗುರುಮಠಕಲ್ ಮಾರ್ಗವಾಗಿ ನಗರಕ್ಕೆ ಬಂತು. ಯುವಕರು ಬೈಕ್ ರ್್ಯಾಲಿಯ ಮೂಲಕ ಹೈದರಾಬಾದ್ ರಸ್ತೆಯ ಗಂಜ್ ವೃತ್ತದ ಬಳಿ ಜ್ಯೋತಿಯಾತ್ರೆಯನ್ನು ಸ್ವಾಗತಿಸಿದರು.
ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಉಮೇಶ ಕೆ. ಮುದ್ನಾಳ ಮಾತನಾಡಿ, ‘ಈ ಹಿಂದೆ ರಾಜ್ಯದಾದ್ಯಂತ ವಿಠಲ ಹೇರೂರು ಜ್ಯೋತಿಯಾತ್ರೆಗೆ ಚಾಲನೆ ನೀಡಿದ್ದರು. ಇದೀಗ ಸಮಾಜದಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜಾಗೃತಿ ಮೂಡಿಸಲು ಜ್ಯೋತಿಯಾತ್ರೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.
‘ಬೀದರ್ನಲ್ಲಿ ಮೇ 28ಕ್ಕೆ ವಿಭಾಗಮಟ್ಟದ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜ್ಯೋತಿಯಾತ್ರೆ ಹೈದರಾಬಾದ್ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದೆ’ ಎಂದು ಅವರು ತಿಳಿಸಿದರು.