ಭಾನುವಾರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮನೆ ಸುತ್ತಮುತ್ತ, ರಸ್ತೆಗುಂಟ ಗಿಡಮರಗಳನ್ನು ಬೆಳೆಸುವುದರಿಂದ ಹಾಗೂ ಸ್ವಚ್ಛತೆ ಕಾಪಾಡುವುದರಿಂದ ಆಗುವ ಲಾಭಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಜತೆಗೆ ಎಲ್ಲರೂ ತಮ್ಮ ಮನೆ, ಮನೆಯ ಆವರಣ, ಸುತ್ತಮುತ್ತಲ ಪರಿಸರ, ವಾರ್ಡ್, ಗ್ರಾಮ ಸ್ವಚ್ಛತೆಗೆ ಪರಸ್ಪರ ಸಹಕಾರ ನೀಡಬೇಕು’ ಎಂದರು.