ಆದರೆ, ತಾಲ್ಲೂಕು ಆಡಳಿತ ಕೈಗೊಂಡಿರುವ ಕಾಮಗಾರಿ ತೃಪ್ತಿದಾ ಯಕ ಎನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳದಲ್ಲಿದ್ದ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಜಾಲಿ ಗಿಡ ಹಾಗೂ ಹೂಳಿನಿಂದ ತುಂಬಿದ್ದ ಕೆರೆಯನ್ನು ಯುವ ಪಡೆಯ ಕಾರ್ಯ ಕರ್ತರು ‘ ನಮ್ಮ ಕೆರೆ ನಮ್ಮ ಹಕ್ಕು’ ಆಭಿಯಾನದಡಿ ಶ್ರಮದಾನ ಮಾಡಿ ಸ್ವಚ್ಛಗೊಳಿಸಿದ್ದಾರೆ. ಆದರೆ, ತಾಲ್ಲೂಕು ಆಡಳಿತ ಕೆರೆಯಿಂದ ತೆಗೆದ ಹೂಳನ್ನು ದಂಡೆಯ ಮೇಲೆ ಸುರಿಯುತ್ತಿರುವುದು ಸರಿಯಲ್ಲ. ಕೂಡಲೇ ಹೂಳನ್ನು ಬೇರೆಡೆ ಸಾಗಿಸಬೇಕು ಎಂದು ಒತ್ತಾಯಿಸಿದರು.