ಸಿಕ್ಕಿಂನಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜ್ನಾಥ್ ಸಿಂಗ್, ‘ಕಾಶ್ಮೀರ, ಕಾಶ್ಮೀರಿಗಳು, ಕಾಶ್ಮೀರಿ ಭಾವನೆಗಳು ಭಾರತಕ್ಕೆ ಸೇರಿದವು. ನಮ್ಮ ಸರ್ಕಾರ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದೆ. ಕಾಶ್ಮೀರ ನಮ್ಮದು, ಕಾಶ್ಮೀರದವರು ನಮ್ಮವರು. ಕಾಶ್ಮೀರಿ ಭಾವನೆಯೂ ನಮ್ಮದು’ ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು.