ಚಿಕ್ಕಮಗಳೂರು: ‘ದಲಿತರ ಮನೆಯಲ್ಲಿ ಬಿಜೆಪಿ ನಾಯಕರು ಹೋಟೆಲ್ ಊಟ ಸೇವಿಸಿ ದ್ದಾರೆ ಎಂಬ ಚರ್ಚೆಯನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಹುಟ್ಟುಹಾಕಿದ್ದಾರೆ. ಅವರು ಸುಮ್ಮನಿದ್ದರೆ ಒಳ್ಳೆಯದು’ ಎಂದು ಎಂದು ಶಾಸಕ ಸಿ.ಟಿ.ರವಿ ಎಚ್ಚರಿಸಿದರು.
‘ಕುಮಾರಸ್ವಾಮಿ ಬೆಳವಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದಾಗ ರಾತ್ರಿ 12 ಗಂಟೆವರೆಗೆ ಯಾರ ಮನೆಯಲ್ಲಿದ್ದರು, ಏನು ಊಟ ಮಾಡಿದರು, ಯಾವ ಬೆಡ್ಶೀಟ್ ಹೊದ್ದುಕೊಂಡಿದ್ದರು ಎಲ್ಲವೂ ನನಗೆ ಗೊತ್ತು. ಅದನ್ನೆಲ್ಲ ಬಿಚ್ಚಿಟ್ಟರೆ ಅವರ ಗೌರವ ಉಳಿಯುವುದಿಲ್ಲ’ ಎಂದರು.
‘ಆತಿಥೇಯರು ಎಲ್ಲಿಂದ ಊಟ ತಂದುಕೊಟ್ಟರೂ ನಾವು ಸೇವಿಸುತ್ತೇವೆ’ ಎಂದರು.