ಬೆಂಗಳೂರು: ರೌಡಿ ವಿ.ನಾಗರಾಜ್ ಹಾಗೂ ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿಯನ್ನು ಮತ್ತೆ ಮೇ 25ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಹತ್ತು ದಿನಗಳ ಕಸ್ಟಡಿ ಅವಧಿ ಮುಗಿದಿದ್ದರಿಂದ ಹೆಣ್ಣೂರು ಠಾಣೆಯ ಪೊಲೀಸರು ಆರೋಪಿಗಳನ್ನು ನಗರದ 11ನೇ ಎಸಿಎಂಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದರು.
‘ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ತಮಿಳುನಾಡಿಗೆ ಕರೆದೊಯ್ಯಬೇಕಿದೆ. ಹೀಗಾಗಿ ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕು’ ಎಂದು ಪೊಲೀಸರು ಮನವಿ ಮಾಡಿದರು.
ಮಾಧ್ಯಮದವರ ನೋಡಿ ಕಣ್ಣೀರಿಟ್ಟ: ವಿಚಾರಣೆ ಬಳಿಕ ನಾಗರಾಜ ಹಾಗೂ ಆತನ ಮಕ್ಕಳನ್ನು ಪೊಲೀಸರು ಕೋರ್ಟ್ನಿಂದ ಹೊರಕರೆತಂದರು. ಈ ವೇಳೆ ಮಾಧ್ಯಮದವರನ್ನು ಕಂಡ ನಾಗರಾಜ್ ಕಣ್ಣೀರಿಟ್ಟ.