ಚಿಕ್ಕಬಳ್ಳಾಪುರ: ಬೈಕ್ ನಿಧಾನವಾಗಿ ಓಡಿಸುವಂತೆ ಹೇಳಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಎಎಸ್ಐ ಶಿವಪ್ಪ ಅವರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ ಆರೋಪದ ಮೇಲೆ ಶಿಡ್ಲಘಟ್ಟ ನಿವಾಸಿ, ಕ್ಯಾಬ್ ಚಾಲಕ ಗಜೇಂದ್ರ ಎಂಬುವನನ್ನು ನಗರ ಪೊಲೀಸ್ ಠಾಣೆ ಪೊಲೀಸರು ಸೋಮವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.