ಅಕ್ಕಿಪಿಕ್ಕಿ ಜನಾಂಗ ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರ ನಮ್ಮ ಹಕ್ಕುಗಳನ್ನು ಸರ್ಕಾರ ಕೂಡಲೇ ಕೊಡಿಸಬಹುದು. ಆದರೆ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ. ಅಪಾರ ತೊಂದರೆ ಎದುರಿಸುತ್ತಿರುವ ಅಕ್ಕಿಪಿಕ್ಕಿ ಜನಾಂಗಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಗ್ರಾಮಸ್ಥರಾದ ಸುಬ್ರಹ್ಮಣ್ಯ, ರವಿ, ಶಾಂತಮ್ಮ, ಕಾವೇರಿ, ಮಾರಮ್ಮ, ರವಿ, ಮಹದೇವು, ಪಾರ್ವತಿ, ಲಕ್ಷ್ಮಿ, ವೆಂಕಟಮ್ಮ ಭಾಗವಹಿಸಿದ್ದರು.