ಮಡಿಕೇರಿ ತಾಲ್ಲೂಕಿನಿಂದ 18, ಸೋಮವಾರಪೇಟೆ ತಾಲ್ಲೂಕಿನಿಂದ 12 ಮತ್ತು ವಿರಾಜಪೇಟೆ ತಾಲ್ಲೂಕಿನಿಂದ 3 ಮಂದಿ ಸೇರಿದಂತೆ ಒಟ್ಟು 33 ಮಂದಿ ಭಾಗವಹಿಸಿದ್ದರು. ಬಂದೂಕು ತರಬೇತಿಗೆ ಆಯ್ಕೆಗೊಂಡಿರುವ ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಬಂದೂಕು ತರಬೇತಿ ಪಡೆಯುವುದರ ಉದ್ದೇಶವೇನು ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಡಿವೈಎಸ್ಪಿ ಛಬ್ಬಿ, ಕರೀಂ ರಾವುತರ್, ಭರತ್, ತಿಮ್ಮಪ್ಪಗೌಡ, ಮಹೇಶ್, ವೆಂಕಟರಮಣ ಇದ್ದರು.