ಅಪಘಾತ; ಸಾವು
ಕುಶಾಲನಗರ: ಕಣಿವೆ ಗ್ರಾಮದ ಬಳಿ ಸೋಮವಾರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಶಿರಂಗಾಲ ಗ್ರಾಮದ ನಿವಾಸಿ ಧರ್ಮಪ್ಪ (45) ಮೃತಪಟ್ಟರು. ಧರ್ಮಪ್ಪ ಅವರು ಮಗ ಅಮಿತ್ ಜೊತೆಗೆ ಬೈಕ್ನಲ್ಲಿ ತೆರಳುವಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರಪೆಟ್ಟುಬಿದ್ದು, ಧರ್ಮಪ್ಪ ಮೃತಪಟ್ಟರು.
ಅಮೀತ್ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.