ಮೂಡಿಗೆರೆ: ತಾಲ್ಲೂಕಿನ ಬಣಕಲ್ ಹೋಬಳಿಯ ಬಂಕೇನಹಳ್ಳಿ ಗ್ರಾಮಕ್ಕೆ ಭಾನುವಾರ ಮುಂಜಾನೆ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿವೆ.
ಸಾರಗೋಡು ಮೀಸಲು ಅರಣ್ಯ ದಿಂದ ಹೆಗ್ಗುಡ್ಲು ಮಾರ್ಗವಾಗಿ ಬಂಕೇನ ಹಳ್ಳಿಗೆ ಕಾಡಾನೆಗಳು ಬಂದಿರಬಹುದು ಎಂದು ಶಂಕಿಸಲಾಗಿದ್ದು, ಬಂಕೇನಹಳ್ಳಿ ಗ್ರಾಮದ ಬಿ.ಜೆ. ಚಂದ್ರೇಗೌಡ ಎಂಬವರ ಕಾಫಿ ತೋಟದೊಳಗೆ ಪ್ರವೇಶಿಸಿ, ಕಾಫಿಗಿಡಗಳನ್ನು ತುಳಿದು ಹಾನಿ ಗೊಳಿಸಿವೆ. ಕಾಫಿತೋಟದ ಮಧ್ಯೆ ಬೆಳೆದಿರುವ ಬಾಳೆ ಗಿಡಗಳನ್ನು ತಿಂದು ಹಾಕಿರುವ ಕಾಡಾನೆಗಳು, ಬಂಕೇನ ಹಳ್ಳಿಯಿಂದ ಚಕ್ಕಮಕ್ಕಿಯತ್ತ ತೆರಳಿವೆ.