ಹೊನ್ನಾಳಿ: ರೈತರ ಕಷ್ಟ–ನಷ್ಟಗಳಿಗೆ ಮಳೆಯೇ ಶಾಶ್ವತ ಪರಿಹಾರ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು. ತಾಲ್ಲೂಕಿನಲ್ಲಿ ಆತ್ಮಹತ್ಯೆಗೆ ಶರಣಾದ ರೈತರಾದ ದೊಡ್ಡೆತ್ತಿನಹಳ್ಳಿ ರುದ್ರಪ್ಪ, ಕೊಡಚಗೊಂಡನಹಳ್ಳಿಯ ಮಂಜಪ್ಪ, ಕೋಟೆಮಲ್ಲೂರಿನ ತೀರ್ಥಲಿಂಗೇಶ್ವರ ಗೌಡ ಹಾಗೂ ನರಸಗೊಂಡನಹಳ್ಳಿ ಸುಜಾತಾ ಅವರ ಕುಟುಂಬಗಳಿಗೆ ಸೋಮವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಲಾ ₹ 5 ಲಕ್ಷ ಪರಿಹಾರದ ಚೆಕ್ಗಳನ್ನು ವಿತರಿಸಿ ಮಾತನಾಡಿದರು.