ವಾಗ್ವಾದ: ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗದೇ ಹಿಂದೂ ಸಂಘಟನೆಗಳ ಯುವಕರ ಮೇಲೆ ಕೆರೂರ ಪಿಎಸ್ಐ ಎಸ್.ಎಂ.ಅವಜಿ ಹಾಗೂ ಕೆಲ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿ ಸ್ಥಳೀಯ ಹಲವು ಮುಖಂಡರು ಪಿಎಸ್ಐ ಜೊತೆಗೆ ತೀವ್ರ ಮಾತಿನ ಚಕಮಕಿ, ವಾಗ್ವಾದ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಪ್ರಜಾವಾಣಿಗೆ ತಿಳಿಸಿದ್ದಾರೆ.ಈ ಘಟನೆ ಭಾನುವಾರ ಬೆಳಕಿಗೆ ಬಂದಿದ್ದರೂ ಮಧ್ಯರಾತ್ರಿ 11 ರ ನಂತರ ವಿಳಂಬವಾಗಿ ದೂರು ದಾಖಲು ಮಾಡಲಾಯಿತು ಎಂದು ಧುರೀಣರು ಆರೋಪಿಸಿದರು.