ಕೆಲವು ಪ್ರದೇಶದಲ್ಲಿ ನೀರು ಪೋಲಾಗುತ್ತಿದೆ. ಇದನ್ನು ತಡೆದು ಬೇರೆ ವಾರ್ಡ್ಗಳಿಗೆ ಪೂರೈಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಅವೈಜ್ಞಾನಿಕ ನೀರು ಸರಬರಾಜು ವ್ಯವಸ್ಥೆಗೆ ಬೇಸತ್ತಿರುವ ನಮಗೆ ಪ್ರತಿಭಟನೆಯೊಂದೇ ಉಳಿದಿರುವ ಏಕೈಕ ಮಾರ್ಗವಾಗಿದೆ. ನಮಗೆ ಟ್ಯಾಂಕರ್ ಮೂಲಕವಾದರೂ ನೀರು ಕೊಡಿ ಎಂದು ಅವರು ಆಗ್ರಹಿಸದರು. ಶರಣು ಈಟಿ, ಯು.ಬಿ. ಶೆಡೆಗಾಳಿ, ಅನ್ನಪೂರ್ಣ ಹಂಜಿ, ಎಸ್.ಐ. ಇಂಗಳೆ, ಎಸ್.ವಿ. ಜಂಗಮನಿ ಇದ್ದರು.