ನಗರದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಶರಣಪ್ಪ ಗಂಗಾವತಿ ಅವರು, ಕೊಪ್ಪಳ ಜಿಲ್ಲೆ ಯಿಂದ ಮರಳು ಸಾಗಾಟ ಮಾಡುವು ದನ್ನು ಇಲ್ಲಿನ ಲಾರಿ ಮಾಲೀಕರು ವಿರೋಧಿಸುತ್ತಿದ್ದಾರೆ. ನಮ್ಮ ಜಿಲ್ಲೆಗೆ ಬೇರೆ ಜಿಲ್ಲೆಗಳಿಂದ ಮರಳು ಸಾಗಾಟ ಮಾಡು ವಂತಿಲ್ಲ. ನೀವೇಕೆ ಮರಳು ತರುತ್ತಿದ್ದೀರಿ ಎನ್ನುತ್ತಿದ್ದಾರೆ. ಹಣಕ್ಕೆ ಬೇಡಿಕೆ ಸಲ್ಲಿಸಿ, ಹಣ ನೀಡದ ಸಂದರ್ಭದಲ್ಲಿ ಹಲ್ಲೆಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.