ಮದುವೆ ಮಂಟಪಗಳು ಇಂದು ಗ್ರಾಮ ಮಟ್ಟಕ್ಕೂ ತಲುಪಿವೆ. ನಗರಗಳ ಕಲ್ಯಾಣ ಮಂಟಪಗಳು ಅದ್ಧೂರಿಯಾಗಿ ಸಕಲ ಸೌಲಭ್ಯಗಳೊಂದಿಗೆ ಬೆಳೆದು ನಿಂತಿವೆ. ಬಾಡಿಗೆ ಲಕ್ಷ ದಾಟಿ ಹೋಗಿದೆ.
ಅನೇಕ ಕಲ್ಯಾಣ ಮಂಟಪಗಳಲ್ಲಿ ಸಾಕಷ್ಟು ಗಾಳಿ ಆಡಲು ಅವಕಾಶವಿದ್ದರೂ, ಅಲಂಕಾರಕ್ಕಾಗಿ ಸುತ್ತ ಬಣ್ಣ ಬಣ್ಣದ ಬಟ್ಟೆ ಇಳಿಬಿಡಲಾಗುತ್ತಿದೆ. ಇದರಿಂದಾಗಿ ಕಿಟಕಿಗಳಿಂದ ಬರುವ ಗಾಳಿ ನಿಂತು ವಿಪರೀತ ಸೆಕೆಯಾಗುತ್ತದೆ.
ಬಿಸಿಲ ಧಗೆ ಹೆಚ್ಚಾಗಿರುವ ಏಪ್ರಿಲ್, ಮೇ ತಿಂಗಳಲ್ಲಿಯೇ ಮದುವೆಗಳು ಅಧಿಕವಾಗಿ ನಡೆಯುತ್ತವೆ. ಇಂಥ ಸಂದರ್ಭದಲ್ಲಿ ಅಲಂಕಾರಕ್ಕಾಗಿ ಕಿಟಕಿಗಳನ್ನು ಮುಚ್ಚುವುದು ಸರಿಯಲ್ಲ. ಕಿಟಕಿಗಳನ್ನು ಮುಚ್ಚದೆಯೇ ಅಲಂಕಾರ ಮಾಡುವುದು ಸಾಧ್ಯವಿಲ್ಲವೇ? ಎಲ್ಲರೂ ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕು.
ಜಿ.ಬಿ. ಕಂಬಾಳಿಮಠ, ಹುನಗುಂದ