‘ಪರೀಕ್ಷೆ ಹತ್ತಿರ ಇರುವುದರಿಂದ ಈಗ ಟೆಂಡರ್ ಕರೆದು ಹೊಸ ಸಂಸ್ಥೆಗೆ ಅನುಮತಿ ನೀಡುವುದು ಕಷ್ಟ. ಹಾಗಾಗಿ ಒಪ್ಪಂದ ಮುಂದುವರಿಸಿದ್ದೇವೆ’ ಎಂದು ಮುನಿರಾಜು ವಿವರಿಸಿದರು. ‘ಆದರೆ, ಒಪ್ಪಂದ ಮುಗಿಯುವ ಎರಡು ತಿಂಗಳ ಮುಂಚೆಯೇ ಟೆಂಡರ್ ಕರೆಯಬೇಕಾಗಿತ್ತು. ಅಲ್ಲದೆ, ಅಂಕಗಳನ್ನು ಮುದ್ರಿಸುವಾಗಲೂ ಸಾಕಷ್ಟು ಗೋಪ್ಯತೆ ಕಾಪಾಡಿಕೊಳ್ಳಬೇಕಾಗಿದೆ. ವಿಶ್ವವಿದ್ಯಾಲಯವೇ ಈ ಕೆಲಸ ನಿರ್ವಹಿಸಲು ಸಾಧ್ಯ. ಅಂಕಪಟ್ಟಿಗೆಂದು ವಿದ್ಯಾರ್ಥಿಗಳಿಂದ ಹಣ ಪಡೆಯಲಾಗುತ್ತದೆ. ಅವರಿಗೆ ಯಾವುದೇ ಅನ್ಯಾಯ ಆಗಬಾರದು’ ಎಂದು ಸಿಂಡಿಕೇಟ್ ಸದಸ್ಯರೊಬ್ಬರು ಹೇಳಿದರು.