ಕಲ್ಲುತೂರಾಟದಿಂದ ರಕ್ಷಣೆ ಪಡೆಯುವ ಸಲುವಾಗಿ ಫಾರೂಕ್ ಅಹಮದ್ ಧರ್ ಎಂಬುವವರನ್ನು ಸೇನೆಯ ಜೀಪಿಗೆ ಕಟ್ಟಿ ಬದ್ಗಾಂ ಜಿಲ್ಲೆಯ ಹಳ್ಳಿಗಳಲ್ಲಿ ಏಪ್ರಿಲ್ 19ರಂದು ಮೆರವಣಿಗೆ ಮಾಡಲಾಗಿತ್ತು. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ನ್ಯಾಯ ಮತ್ತು ಮಾನವಹಕ್ಕುಗಳ ಅಂತರರಾಷ್ಟ್ರೀಯ ವೇದಿಕೆ (ಐಎಫ್ಜೆಎಚ್ಆರ್ಜೆಕೆ) ರಾಜ್ಯ ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, ಜೂನ್ 5ಕ್ಕೆ ವಿಚಾರಣೆ ನಡೆಯಲಿದೆ.