ಈ ಪ್ರಕರಣದ ವಿಚಾರಣೆ ನಡೆ ಸುತ್ತಿರುವ ವಿಶೇಷ ನ್ಯಾಯಾಲಯದ ಸಿಬಿಐ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಗುರುವಾರ ತೀರ್ಪು ನೀಡಿದ್ದಾರೆ. ತಲ್ಕಟೋರಾ ಮತ್ತು ಶಿವಾಜಿ ಕ್ರೀಡಾಂಗಣಗಳ ನವೀಕರಣ ದ ಗುತ್ತಿಗೆ ಪಡೆದಿದ್ದ ಮುಂಬೈನ ಸಂಸ್ಥೆಯ ನಿರ್ದೇಶಕರಾದ ರಾಜಾ ಅದೇರಿ (86) ಮತ್ತು ಉದಯಶಂಕರ್ ಭಟ್ (59) ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಅವ ರಿಬ್ಬರಿಗೂ ತಲಾ ₹ 5 ಲಕ್ಷ ಮತ್ತು ಸಂಸ್ಥೆಗೆ ₹ 10 ಲಕ್ಷ ದಂಡ ಕೂಡ ಹಾಕಲಾಗಿದೆ.