ಬೆಂಗಳೂರು: ಅನಾರೋಗ್ಯಕ್ಕೆ ಒಳಗಾಗಿದ್ದ ಹಾಕಿ ಆಟಗಾರ ಚೇತನ್ ಕೃಷ್ಣ (35) ಬುಧವಾರ ನಿಧನರಾದರು. 2005ರಿಂದ 2011ರ ಅವಧಿಯಲ್ಲಿ ಅವರು ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ ಮತ್ತು ಅಖಿಲ ಭಾರತ ಹಾಕಿ ಟೂರ್ನಿಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.
ಕೆ.ಎಸ್.ಪಿ ಮತ್ತು ರೈಲು ಗಾಲಿ ಕಾರ್ಖಾನೆ ತಂಡದ ಪರವಾಗಿಯೂ ಆಡಿದ್ದಾರೆ. ಗುರುವಾರ ಸಂಜೆ ಅಂತ್ಯ ಸಂಸ್ಕಾರ ನಡೆಯಿತು.