ಬೆಂಗಳೂರು: ರಂಗಾಯಣ ಮೈಸೂರು, ಶಿವಮೊಗ್ಗ ಹಾಗೂ ಕಲಬುರ್ಗಿ ಕೇಂದ್ರಗಳ ನಿರ್ದೇಶಕರ ನೇಮಕಕ್ಕೆ ಕೊನೆಗೂ ಸರ್ಕಾರ ಮುಂದಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ಗುರುವಾರ ‘ರಂಗ ಸಮಾಜದ’ ಸಭೆ ನಡೆದಿದ್ದು, ಈ ಮೂರೂ ಕೇಂದ್ರಗಳಿಗೂ ತಲಾ ಮೂವರ ಹೆಸರನ್ನು ಶಿಫಾರಸು ಮಾಡಿದೆ.
ಮೈಸೂರು ಕೇಂದ್ರಕ್ಕೆ ಎಚ್.ಎಸ್. ಉಮೇಶ್, ಭಾಗೀರಥಿ ಬಾಯಿ ಕದಂ, ಗೋಪಾಲಕೃಷ್ಣ ನಾಯರಿ ಹೆಸರು ಕಳುಹಿಸಲಾಗಿದೆ.
ಶಿವಮೊಗ್ಗ ಕೇಂದ್ರಕ್ಕೆ ಎಂ. ಗಣೇಶ್, ಸಾಸಿವೆಹಳ್ಳಿ ಸತೀಶ್ ಮತ್ತು ಪ್ರತಿಭಾ ಹಾಗೂ ಕಲಬುರ್ಗಿ ರಂಗಾಯಣಕ್ಕೆ ಮಹೇಶ್ ಪಾಟೀಲ್, ಸಾಂಬಶಿವ ದಳವಾಯಿ ಮತ್ತು ಸಹನಾ ಪಿಂಜಾರ ಅವರ ಹೆಸರು ಶಿಫಾರಸು ಮಾಡಲಾಗಿದೆ.
ಮೈಸೂರು ಕೇಂದ್ರದ ನಿರ್ದೇಶಕರ ಹುದ್ದೆ 8 ತಿಂಗಳಿಂದ ಖಾಲಿ ಇದ್ದು, ಶಿವಮೊಗ್ಗ ಮತ್ತು ಕಲಬುರ್ಗಿ ಕೇಂದ್ರದ ನಿರ್ದೇಶಕರ ಸ್ಥಾನ ಖಾಲಿಯಾಗಿ ವರ್ಷವೇ ಕಳೆದಿದೆ.