ಚೆನ್ನೈ: ಅಭಿಮಾನಿಗಳು ಅಶಿಸ್ತು ಪ್ರದರ್ಶಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ನಟ ರಜನಿಕಾಂತ್ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಪ್ರವೇಶ ಕುರಿತಂತೆ ‘ಸೂಪರ್ಸ್ಟಾರ್’ ಸುಳಿವು ನೀಡಿದ ನಂತರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೇ, ನಟನ ರಾಜಕೀಯ ಪ್ರವೇಶ ವಿರೋಧಿಸಿದ ನಾಯಕರ ಪ್ರತಿಕೃತಿಗಳನ್ನು ಬೆಂಕಿ ಹಚ್ಚಿದ ಪ್ರಕರಣವೂ ನಡೆದಿತ್ತು.