1997ರಿಂದ 2004ರವರೆಗೆ ಬಿಡಿಎ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು 2004ರಿಂದ 2007ರವರೆಗೆ ಬಿಎಂಆರ್ಸಿಎಲ್ನಲ್ಲಿ ಕೆಲಸ ಮಾಡಿದ್ದರು.
ಈ ಅವಧಿಯಲ್ಲೇ ಎರಡು ಸಂಸ್ಥೆಯ ನೂರಾರು ಕೋಟಿ ಹಣವನ್ನು ಸರ್ಕಾರದ ಅನುಮತಿ ಪಡೆಯದೆ ಮ್ಯೂಚುವಲ್ ಫಂಡ್ನಲ್ಲಿ ತೊಡಗಿಸಲಾಗಿತ್ತು. ಇದು 2014ರ ಲೆಕ್ಕ ಪರಿಶೋಧಕರ ವರದಿಯಿಂದ ಬಹಿರಂಗವಾಗಿತ್ತು.
ಪ್ರಕರಣದ ತನಿಖೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು ಸಂದೀಪ್ ದಾಸ್, ಬಿಡಿಎ ಹಣಕಾಸು ವಿಭಾಗದ ಅಧಿಕಾರಿ ಶೇಷಪ್ಪ, ದ್ವಿತೀಯ ದರ್ಜೆ ಸೂಪರಿಟೆಂಡೆಂಟ್ ವಸಂತ್ ಕುಮಾರ್, ಗಂಗಣ್ಣ, ಬ್ಯಾಂಕ್ ಅಧಿಕಾರಿ ಪನ್ನೀರು ಸೇಲ್ವಂ, ಅನಂತ್, ನಿವೃತ್ತ ಐಎಎಸ್ ಅಧಿಕಾರಿ ಮೊನ್ನಪ್ಪ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.