‘ಬೆಂಕಿ ದುರಂತದ ವೇಳೆ ಬೆಂಕಿ ನಂದಿಸುವ ಯಂತ್ರವನ್ನು ದ್ರೋಣ ತಂಡ ಸಿದ್ಧಪಡಿಸಿದೆ. ಒಣ ಕಸ ಸಂಗ್ರಹ ಯಂತ್ರ, ರಾಸಾಯನಿಕಗಳನ್ನು ಸಿಂಪಡಿಸುವ ಯಂತ್ರವನ್ನು ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ. ಅಶ್ವ ರೇಸ್ ಕಾರು ಯಾವುದೇ ಯಾಂತ್ರಿಕ ಅಥವಾ ವಿದ್ಯುತ್ ಸಂಬಂಧಿ ಸಮಸ್ಯೆಗಳಿಲ್ಲದೆ 85 ಕಿ.ಮೀ. ದೂರವನ್ನು ಚಲಿಸಿದೆ. 1.5 ಗಂಟೆಯಲ್ಲಿ ಯಾವುದೇ ಬ್ಯಾಟರಿ ಚಾರ್ಜ್ ಇಲ್ಲದೆ 30 ಕಿಮೀ ಸಂಚರಿಸಿದೆ’ ಎಂದರು.