ಚನ್ನಮ್ಮನ ಕಿತ್ತೂರು: ಕಿತ್ತೂರಿಗೆ ಬರುವ ಜನರಿಗೆ ಇಲ್ಲಿಯ ಇಬ್ಬರು ಅಂಗಡಿಕಾರರು ಶುದ್ಧ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಮಾಡಿದ್ದಾರೆ. ಬಿರು ಬೇಸಿಗೆ ಪ್ರಹಾರಕ್ಕೆ ಸಿಕ್ಕು ಪ್ರಯಾಣಿಕರು ‘ಉಸ್ಸಪ್ಪ’ ಎಂದು ಬಸವಳಿದಾಗ ನೀರು ಬೇಡುವುದು ಸಹಜ. ಇಂತಹ ಪರ ಊರಿನ ಗ್ರಾಮಸ್ಥರ ನೀರಿನ ದಾಹ ತಣಿಸಲು ಇಲ್ಲಿಯ ವ್ಯಾಪಾರಸ್ಥರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.