ಪುಣೆ : ಉದ್ಯೋಗಿಗಳ ಭವಿಷ್ಯ ನಿಧಿಗೆ(ಪಿಎಫ್) ಉದ್ಯೋಗಿ ಮತ್ತು ಉದ್ಯೋಗದಾತರ (ಮಾಲೀಕ) ಕೊಡು ಗೆಯನ್ನು ಶೇ12ರಿಂದ ಶೇ 10ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಕೇಂದ್ರೀಯ ಧರ್ಮದರ್ಶಿ ಮಂಡಳಿ (ಸಿಬಿಟಿ) ತಿರಸ್ಕರಿಸಿದೆ.
‘ಶೇ 12 ರಷ್ಟನ್ನೇ ಉಳಿಸಿಕೊಳ್ಳುವಂತೆ ಉದ್ಯೋಗದಾತರು, ಉದ್ಯೋಗಿಗಳು ಮತ್ತು ಸರ್ಕಾರದ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ’ ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಎಂ. ಸತ್ಯವತಿ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.