ಬೆಂಗಳೂರು: ‘ಜೂನ್ 3ರಂದು ನೈರುತ್ಯ ಮುಂಗಾರು ರಾಜ್ಯ ಪ್ರವೇಶಿಸಲಿದ್ದು, 5ನೇ ತಾರೀಕಿನ ವೇಳೆಗೆ ರಾಜ್ಯದ ಎಲ್ಲಾ ಭಾಗಗಳಿಗೂ ವ್ಯಾಪಿಸಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸುಂದರ ಮಹಾದೇವ ಮೇತ್ರಿ, ‘ಕೇರಳಕ್ಕೆ ಮೇ 30ರಂದು ಮುಂಗಾರು ಪ್ರವೇಶಿಸಲಿದ್ದು, ನಂತರ ದಕ್ಷಿಣ ಒಳನಾಡು ಭಾಗದ ಎಲ್ಲ ಕಡೆ ಮತ್ತು ಕರಾವಳಿ ಭಾಗಗಳ ಮೂಲಕ ರಾಜ್ಯಕ್ಕೆ ಅಪ್ಪಳಿಸಲಿದೆ’ ಎಂದು ತಿಳಿಸಿದರು.
ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ, ‘ಇಲ್ಲಿಯವರೆಗಿನ ವಾತಾವರಣ ನೋಡಿದರೆ ಈ ಬಾರಿಯ ಮುಂಗಾರು ಪ್ರಬಲವಾಗಿರಲಿದೆ’ ಎಂದರು.