ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಅಜಿತ್ ಅಗರ್ಕರ್ ಅವರನ್ನು ಮುಂಬೈ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
23 ವರ್ಷದೊಳಗಿನವರ ತಂಡದ ಆಯ್ಕೆ ಸಮಿತಿಗೂ ಅವರು ಮುಖ್ಯಸ್ಥ ರಾಗಿದ್ದಾರೆ. ಸಮಿತಿಯಲ್ಲಿ ಭಾರತ ತಂಡದ ಮಾಜಿ ಆಟಗಾರರಾದ ನೀಲೇಶ್ ಕುಲಕರ್ಣಿ, ಜತಿನ್ ಪರಾಂಜಪೆ ಮತ್ತು ಪ್ರಥಮ ದರ್ಜೆ ಆಟಗಾರರಾಗಿದ್ದ ಸುನಿಲ್ ಮೋರೆ ಕೂಡ ಇದ್ದಾರೆ.
19 ವರ್ಷದೊಳಗಿನವರ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಪವಾರ್ ನೇಮಕಗೊಂಡಿದ್ದು ಆವಿಷ್ಕಾರ್ ಸಾಳ್ವಿ, ರಾಜು ಸುತಾರ್ ಮತ್ತು ಸಂತೋಷ್ ಶಿಂಧೆ ಸಮಿತಿಯಲ್ಲಿದ್ದಾರೆ.
ಅತುಲ್ ರಾನಡೆ 16 ವರ್ಷದೊಳಗಿ ನವರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ರಾಗಿರುವರು. ಮಂದಾರ್ ಫಡ್ಕೆ, ಪೀಯೂಷ್ ಸೋನೆಜಿಮತ್ತು ಮಯೂರ್ ಕದ್ರೇಕರ್ ಸಮಿತಿಯಲ್ಲಿ ದ್ದಾರೆ. ಓಂಕಾರ್ ಖಾವಿಲ್ಕರ್ 14 ವರ್ಷ ದೊಳಗಿವನವರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರು.
ಸಂಜೀವ್ ಜಾಧವ್, ನೀಲೇಶ್ ಪಟವರ್ಧನ್ ಮತ್ತು ಮಂಗೇಶ್ ಧಾರೇಕರ್ ಈ ಸಮಿತಿಯಲ್ಲಿ ದ್ದಾರೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.