‘ಕಾಳ ಕರಿಕಾಳ’ ಸಿನಿಮಾದ ಶೂಟಿಂಗ್ಗೆಂದು ಮುಂಬೈಗೆ ತೆರಳಲು ಅನುವಾಗುತ್ತಿರುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ತುಸು ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, ‘ನೀವು ನಿಮ್ಮ ಕೆಲಸ ಮಾಡಿ, ನನಗೆ ನನ್ನ ಕೆಲಸ ಮಾಡಲು ಬಿಡಿ’ ಎಂದು ಹೇಳಿದ್ದಲ್ಲದೆ, ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.