ಈ ವೇಳೆ ಮಧ್ಯಪ್ರವೇಶಿಸಿದ ನವನಗರ ಠಾಣೆ ಪೊಲೀಸರು, ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಧ್ಯಸ್ಥಿಕೆ ವಹಿಸಿ ಸಂಧಾನಸಭೆ ನಡೆಸಿದರು.
‘ಈ ಸಂದರ್ಭದಲ್ಲಿ ಕಾಲೊನಿ ನಿವಾಸಿಗಳೇ ಗುಡಿ ಹಾಗೂ ಅದಕ್ಕೆ ನೆರಳು ಮಾಡಲು ನಿರ್ಮಾಣ ಮಾಡಿದ್ದ ಪತ್ರಾಸ್ ಅನ್ನು ತೆರವು ಮಾಡುವುದಾಗಿ ಹೇಳಿದ ಕಾರಣ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.