ಈಗ ಕಲ್ಯಾಣಿಗೆ ಮರು ಜೀವ ಬಂದಿದ್ದು, ಸ್ವಚ್ಛತಾ ಕಾರ್ಯ ಮುಗಿದ ರಾತ್ರಿಯೇ ಸುರಿದ ಮಳೆ ನೀರು ಕಲ್ಯಾಣಿಯಲ್ಲಿ ಸಂಗ್ರಹವಾಗಿದೆ. ಇದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.
ಕಲ್ಯಾಣಿಯ ಸ್ವಚ್ಛತಾ ಕಾರ್ಯಕ್ಕೆ ಚಾಲನೆನೀಡಿ ಮಾತನಾಡಿದ ವೇದಿಕೆಯ ಮುಖಂಡ ನಟರಾಜು, ‘ಕಲ್ಯಾಣಿಗಳು, ಕೆರೆ–ಕಟ್ಟೆಗಳನ್ನು ನಿರ್ಲಕ್ಷಿಸಿ ಅವುಗಳನ್ನು ಕಸತುಂಬುವ ತಾಣವಾಗಿ ಬಳಸಿದ್ದರಿಂದಲೇ ಅಂತರ್ಜಲ ಕುಸಿದು ಕುಡಿಯುವ ನೀರಿಗೂ ಪರದಾಡುವಂತಾಗಿದೆ.