ಸಿ.ಐ.ಟಿ.ಯು ಜಿಲ್ಲಾ ಘಟಕ ಅಧ್ಯಕ್ಷ ವಿನಾಯಕ ಕುರುಬರ ಮಾತನಾಡಿ, ‘ಗ್ರಾಮ ಪಂಚಾಯ್ತಿಗಳ ನೌಕರರಿಗೆ ನಿಗದಿತ ಸಮಯಕ್ಕೆ ವೇತನ ನೀಡುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಬೇಜವ್ದಾರಿ ತೋರುತ್ತಿದ್ದಾರೆ’ ಎಂದರು.
‘ತಾಲ್ಲೂಕಿನ ಗ್ರಾಮ ಪಂಚಾಯ್ತಿ ಸಿಬ್ಬಂದಿ ಬಾಕಿ ವೇತನವನ್ನು ತಕ್ಷಣವೇ ನೀಡಬೇಕು, ಈ ಬಗ್ಗೆ ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಆದೇಶದಂತೆ ಕ್ಲರ್ಕ್ಗೆ ₹13,167, ವಾಟರ್ಮನ್ಗೆ ₹11,265, ಸಿಪಾಯಿಗೆ ₹10,765 ಹಾಗೂ ಬಿಲ್ ಕಲೆಕ್ಟರ್ಗೆ ₹13,200 ಪ್ರತಿ ತಿಂಗಳು ನೀಡಬೇಕು. ಜನಶ್ರೀ ವಿಮಾ ಯೋಜನೆ ಕಲ್ಪಿಸಬೇಕು. ಅನು ಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು’ ಎಂದರು.
ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆರ್. ಪಾಟೀಲ, ‘ಈ ಸಮಸ್ಯೆಗಳ ಬಗ್ಗೆ ಜೂನ್ 9ರಂದು ತಾಲ್ಲೂಕು ಪಂಚಾಯ್ತಿಯಲ್ಲಿ ಸಭೆ ಕರೆದು ಚರ್ಚಿಸಲಾಗುವುದು’ ಎಂದರು.
ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿ.ಕೆ.ಬಾಳಿಕಾಯಿ, ಅಧ್ಯಕ್ಷ ನಾರಾಯಣ ಕಾಳೆ, ಪರಶುರಾಮ ಪುರದ, ಅಬ್ದುಲ್ ಗುತ್ತಲ, ಗುಡ್ಡಪ್ಪ ರಾಮಣ್ಣನವರ, ಪುಷ್ಪಾ ಬಿ, ಎಂ.ಬಿ.ಕೊಲ್ಲಾಪುರಿ, ಗದಿಗೆಪ್ಪ ಮೇಲ್ಮುರಿ ಹಾಗೂ ಪರಮೇಶ್ವರ ಈ ಸಂದರ್ಭದಲ್ಲಿ ಇದ್ದರು.