ಸೂಯಜ್ ಕಾಲುವೆಯಿಂದ ಪೂರ್ವಕ್ಕೆ 30 ಮೈಲಿ ದೂರದಲ್ಲಿ ಮಿತ್ಲಾ ಕಣಿವೆ ಮತ್ತು ಬಿರ್ಗಫ್ ನಡುವೆ ಈಜಿಪ್ಟ್ ಪ್ರತಿದಾಳಿ ನಡೆಸಿದೆಯೆಂದು ಇಸ್ರೇಲ್ ಒಪ್ಪಿಕೊಂಡಿದೆ. ಕಾಲುವೆ ಪ್ರದೇಶಕ್ಕೆ ಪಲಾಯನ ಮಾಡುವ ಮಾರ್ಗವನ್ನು ತೆರೆಯುವುದೇ ಕೈರೋ ಕಾರ್ಯಾಚರಣೆಯ ಉದ್ದೇಶವೆಂದು ಟೆಲ್ ಅವೀವ್ ವಿವರಿಸಿದೆ.
* ಕನ್ನಡ ಮಾಧ್ಯಮದ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಹಿಂದಿ ಡಿಪ್ಲೊಮಾ ಸಲಹೆ
ಬೆಂಗಳೂರು, ಜೂ. 8– ‘ಕನ್ನಡ ಮಾಧ್ಯಮದಲ್ಲಿ ಕಾಲೇಜು ಶಿಕ್ಷಣ ಮುಂದುವರಿಸುವ ವಿದ್ಯಾರ್ಥಿಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಸಾಕಷ್ಟು ವ್ಯಾವಹಾರಿಕ ಜ್ಞಾನ ಪಡೆಯಲು ಅವಕಾಶವಾಗುವಂತೆ ಭಾಷಾಂತರಗಳ ಡಿಪ್ಲೊಮಾ ಕೋರ್ಸುಗಳನ್ನು ಆರಂಭಿಸಲಾಗುವುದು’.
* ಪ್ರತೀಕಾರ ಕ್ರಮ ಕೈಗೊಳ್ಳಲು ರಷ್ಯಕ್ಕೆ ಅರಬ್ ಕರೆ
ಮಾಸ್ಕೋ, ಜೂ. 8– ಇಸ್ರೇಲ್ ವಿರುದ್ಧ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಇಲ್ಲಿನ ಅರಬ್ ರಾಷ್ಟ್ರಗಳ ರಾಯಭಾರಿಗಳು ಇಂದು ರಷ್ಯ ಸರ್ಕಾರಕ್ಕೆ ಕೇಳಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
* ಪಶ್ಚಿಮ ಏಷ್ಯ ನೀತಿ ಬಗ್ಗೆ ಲೋಕಸಭೆಯಲ್ಲಿ ಘರ್ಷಣೆ, ಗಲಭೆ; ಸಭೆ ಹಠಾತ್ತನೆ ಅಂತ್ಯ
ನವದೆಹಲಿ, ಜೂ. 8– ಭಾರತ ಸರ್ಕಾರದ ಪಶ್ಚಿಮ ಏಷ್ಯ ನೀತಿಯ ಬಗ್ಗೆ ಇಂದು ಸಂಜೆ ಲೋಕಸಭೆಯಲ್ಲಿ ಸದಸ್ಯರ ನಡುವೆ ಘರ್ಷಣೆ ಉಂಟಾಯಿತು.
* ಷರತ್ತಿನ ಮೇಲೆ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ
ಇಸ್ರೇಲ್, ಜೂ. 8– ಸಂಬಂಧಪಟ್ಟ ಇತರ ಎಲ್ಲಾ ರಾಷ್ಟ್ರಗಳು ಕದನವಿರಾಮಕ್ಕೆ ಒಪ್ಪುವುದಾದರೆ, ವಿಶ್ವರಾಷ್ಟ್ರ ಸಂಸ್ಥೆಯು ನಿರ್ಣಯಿಸಿದಂತೆ ಕದನವಿರಾಮಕ್ಕೆ ತಾನು ಸಿದ್ಧವೆಂದು ಇಸ್ರೇಲ್ ಸರ್ಕಾರ ಇಂದು ಅಧಿಕೃತವಾಗಿ ಪ್ರಕಟಿಸಿತು.