ಬೋಧನೆಗೆ ಸಹಾಯಕವಾಗುವ ಪಾಠೋಪಕರಣಗಳು ಲಭ್ಯವಿದ್ದರೂ, ಕೊಠಡಿ ಸಮಸ್ಯೆಯಿಂದ ಅವುಗಳ ಸದುಪಯೋಗ ವಿದ್ಯಾರ್ಥಿಗಳಿಗೆ ದಕ್ಕಿಲ್ಲ. ಉರ್ದು ಪ್ರಾಥಮಿಕ ಮತ್ತು ಪ್ರೌಢ ಹಾಗೂ ಕನ್ನಡ ಮಾಧ್ಯಮದ ಪ್ರೌಢಶಾಲೆಗಳು ಒಂದೇ ಕಡೆ ಇರುವುದರಿಂದ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಗೂ ತೊಂದರೆಯಾಗಿದೆ’ ಎಂದು ಉರ್ದು ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಹಿಬೂಬ್ ಅಲಿ ಹೇಳುತ್ತಾರೆ.