ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಪಟ್ಟ ಪರಿಕರಗಳ, ಬೀಜಗಳ, ಯಂತ್ರೋಪಕರಣಗಳ, ರೇಷ್ಮೆ, ತೋಟಗಾರಿಕೆ ಮೀನುಗಾರಿಕೆಗೆ ಸಂಬಂಧಿಸಿದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಹೇಮಾ ಪ್ರಭಾಕರ್, ತಾ.ಪಂ. ಸದಸ್ಯರಾದ ರೂಪರಾಣಿ ಶ್ರೀಧರ್, ಮಹಾಲಕ್ಷ್ಮಿ ಶಿವರಾಜ್ ಜಿಲ್ಲಾ ರೈತ ಸಂಚಾಲಕ ಮೀಸೆ ಮಂಜೇಗೌಡ ಇದ್ದರು.