ಒಮ್ಮೆ ನನ್ನ ತಂದೆ ಮನೆಗೆ ಬಂದಿದ್ದರು. ಆಗ ಅವರನ್ನು ನೋಡಲು ಸಾಕಷ್ಟು ಮಂದಿ ಮನೆಗೆ ಬರುತ್ತಿದ್ದರು. ಬಡತನದಲ್ಲಿಯೂ ಅವರನ್ನು ಸತ್ಕರಿಸುತ್ತಿದ್ದ ರೀತಿಯನ್ನು ಕಂಡ ಅಪ್ಪ, ದೇವರು ನಿಮಗೆ ಅನುಕೂಲ ಕೊಡಲಿ, ಯಶಸ್ಸು ನಿಮ್ಮದಾಗಲಿ ಎಂದು ಹರಸಿದರು. ಇದಾದ ಸ್ವಲ್ಪ ದಿನಗಳಲ್ಲಿಯೇ ದೇವಯ್ಯ ಪಾರ್ಕಿನಲ್ಲಿ ಮನೆಯನ್ನು ನಿರ್ಮಿಸಿದೆವು. ತಂದೆಯ ಹಾರೈಕೆ ಫಲಿಸಿದ ಕಾರಣಕ್ಕೆ ಮನೆಗೆ ಈ ಹೆಸರು ಇರಿಸಿದ್ದೇವೆ.
–ಬಿ.ಕೆ. ಸೀತಾಲಕ್ಷ್ಮೀ, ದೇವಯ್ಯ ಪಾರ್ಕ್