ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿಯಮದ ಪ್ರಕಾರ, ದೇಶಿಯ ವಿಮಾನಗಳು ಹಾರಾಟ ಆರಂಭಿಸುವ 45 ನಿಮಿಷಕ್ಕೂ ಮುಂಚಿತವಾಗಿ ವಿಮಾನಯಾನ ಸಂಸ್ಥೆಗಳು ತಪಾಸಣಾ ಕೇಂದ್ರಗಳನ್ನು ಮುಚ್ಚಬೇಕು. ಅನಂತಪುರ ಲೋಕಸಭಾ ಕ್ಷೇತ್ರದ ಸಂಸದ ದಿವಾಕರ್ ರೆಡ್ಡಿ ತಡವಾಗಿ ಬಂದಿದ್ದರು. ಹೀಗಾಗಿ ವಿಮಾನ ಏರಲು ಅವಕಾಶ ನೀಡಿಲ್ಲ ಎಂದು ಏರ್ಲೈನ್ಸ್ನ ಸಿಬ್ಬಂದಿ ತಿಳಿಸಿದ್ದಾರೆ.