ಶಿರೋಮಣಿ ಅಕಾಲಿದಳದ ಸದಸ್ಯರೂ ಆಗಿರುವ ಸಂಸದ ಹರಿಂದರ್ ಸಿಂಗ್ ಖಾಲ್ಸಾ ಮಾತನಾಡಿ ‘ಹೇಮಂತ್ ಉತ್ತರ ಭಾರತದವರಿಗೆ ಉತ್ತರ ಭಾರತದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲೆತ್ನಿಸಿದವರು. ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಓಡಾಡಿ ಪ್ರಜ್ಞಾವಂತ ಯುವಕರ ಬಲು ದೊಡ್ಡ ಪಡೆಯನ್ನೇ ಕಟ್ಟಿದವರು. ನನಗೆ ಗುರು ಸಮಾನರು‘ ಎನ್ನುತ್ತಾ ಗದ್ಗದಿತರಾದರು.