ಹೈದರಾಬಾದ್: ಬಾಹುಬಲಿ–2 ಚಿತ್ರದಲ್ಲಿ 'ಬಲ್ಲಾಳದೇವ' ಪಾತ್ರದಲ್ಲಿ ಕಾಣಿಸಿಕೊಂಡು ಸಿನಿ ರಸಿಕರನ್ನು ರಂಜಿಸಿದ್ದ ಟಾಲಿವುಡ್ ನಟ ರಾನಾ ದಗ್ಗುಬಾಟಿ ಇದೀಗ ‘ನೇನೆ ರಾಜು ನೇನೆ ಮಂತ್ರಿ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ನಾಯಕ ನಟಿಯರಾಗಿ ಕಾಜಲ್ ಅಗರ್ವಾಲ್, ಕ್ಯಾಥರೀನ್ ಟ್ರೆಸಾ ಕಾಣಿಸಿಕೊಂಡಿದ್ದಾರೆ.
‘ತೇಜ’ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ನೇನೆ ರಾಜು ನೇನೆ ಮಂತ್ರಿ’ ಚಿತ್ರ ತೆಲುಗು, ಹಿಂದಿ, ತಮಿಳು, ಮಾಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ.
ಸುರೇಶ್ ದಗ್ಗುಬಾಟಿ, ಸಿ.ಎಚ್. ಭರತ್ ಚೌಧರಿ ಹಾಗೂ ವಿ. ಕಿರಣ್ ರೆಡ್ಡಿ ಅವರ ಸಹಭಾಗಿತ್ವದಲ್ಲಿ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ.