ಹೇಳಿಕೆಯ ಪೂರ್ಣಪಾಠ:
‘ನಮಸ್ಕಾರ. ನಾನು ರವಿ ಬೆಳಗೆರೆ. ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ. ಲೇಖಕ, ಕಾದಂಬರಿಕಾರ ಮತ್ತು ಬೆಂಗಳೂರಿನಲ್ಲಿ ಒಂದು ಅದ್ಭುತವಾದ ಶಾಲೆ ನಡೆಸ್ತಿದ್ದೀನಿ. ನನಗೆ 1 ವರ್ಷ ಜೈಲು, ₹ 10 ಸಾವಿರ ದಂಡ ಅಂತ ಈ ಸದನ ಸಮಿತಿ ತೀರ್ಪು ನೀಡಿದೆ. ಅದರ ವಿರುದ್ಧ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ವರೆಗೂ ಹೋಗಿ ನಾನು ಬಡಿದಾಡ್ತೀನಿ. ಈ ಸರ್ಕಾರಕ್ಕೆ ಇನ್ನು ಒಂದು ವರ್ಷ ಇದೆ ಚುನಾವಣೆಗೆ. ಇವರ ಜೀವನ ಮುಗೀತು ಇನ್ನು. ಪತ್ರಕರ್ತರ ತಂಟೆಗೆ ಯಾಕ್ರೀ ಬರ್ತೀರಿ. ಯಾವುದೇ ವಿಚಾರಕ್ಕೆ ನನ್ನನ್ನು ಯಾಕೆ ಜವಾಬ್ದಾರನನ್ನಾಗಿ ಮಾಡ್ತೀರಿ. ಇದು ಬಹಳ ದಮನಕಾರಿ ಆಕ್ರಮಣ. ನಾನು ಇದನ್ನು ವಿರೋಧಿಸುತ್ತೇನೆ. ಈ ವ್ಯವಸ್ಥೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ನಾನು ಕೈ ಕಾಲು ಇಲ್ಲದವನಲ್ಲ. ನಾನು ಕೋಳಿವಾಡರಂತೆ ದಡ್ಡ, ಮೂರ್ಖ ಅಲ್ಲ. ಅವರು ಬೇಕಾದ್ದು ಮಾಡಲಿ. ಹೋರಾಟ ಮಾಡದೆ ಕೈಕಟ್ಟಿಕೊಂಡು ನಿಂತು ಅವರಿಗೆ ಶರಣಾಗುವಂತಹ ಪರಿಸ್ಥಿತಿ ನನಗಿಲ್ಲ. ಅಂತಹ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಂಡು ಸಾಯ್ತೀನಿ. ಕಾಂಗ್ರೆಸ್ನ ನಾಗರಾಜ್ ಅವರನ್ನು ನಾನು ನೋಡಿಲ್ಲ. ಶುಕ್ರವಾರ ಅವರು ಫೋನ್ಗೆ ಸಿಕ್ಕಿದ್ದರು. ಅವರದ್ದೇನೋ ಯಲಹಂಕದ ಮಠದ ಗಲಾಟೆ. ವಿಶ್ವನಾಥ್ ಅಂದ.. ನನಗೆ ವೈಯಕ್ತಿಕವಾಗಿ ಶತ್ರುಗಳು ಅಂತ ಇಲ್ಲ. ಸದನಕ್ಕೆ ಕಾಲಿಟ್ಟರೆ ಎಲ್ಲರೂ ಮಿತ್ರರೇ, ಹೊರಗೆ ಬಂದರೆ ಎಲ್ಲರೂ ಶತ್ರುಗಳೇ. ನನ್ನ ಪರಿಚಯದ, ನನ್ನ ಸ್ನೇಹದ, ಆತ್ಮೀಯವಾದ ಅಷ್ಟೂ ಜನ ರಾಜಕಾರಣಿಗಳು ಬಹಳ ಇದ್ದಾರೆ...’
ಇದನ್ನೂ ಓದಿ...
ರವಿ ಬೆಳಗೆರೆ, ಅನಿಲ್ ರಾಜ್ ಶಿಕ್ಷೆ ಜಾರಿಗೆ ಆದೇಶ