* ಬ್ಯಾಂಕ್ ರಾಷ್ಟ್ರೀಕರಣ ಕಾಂಗ್ರೆಸ್ ಉದ್ದೇಶವಿಲ್ಲ: ನಾಯಕರ ಧೋರಣೆ
ನವದೆಹಲಿ, ಜೂನ್ 24– ಕಾಂಗ್ರೆಸ್ ಪಕ್ಷದ ಆರ್ಥಿಕ ಧೋರಣೆಗಳನ್ನು ಕುರಿತಾದ ಅಧಿಕೃತ ಕರಡು ನಿರ್ಣಯದ ಬಗ್ಗೆ ಇಂದು ಪಕ್ಷದ ನಾಯಕರು ಮಾತನಾಡಿದ ಧಾಟಿಯನ್ನು ಗಮನಿಸಿದರೆ, ರಾಷ್ಟ್ರದ ಸಾಲ ನೀಡಿಕೆ ಸಂಸ್ಥೆಗಳನ್ನು ಸಂಪೂರ್ಣವಾಗಿ ರಾಷ್ಟ್ರೀಕರಣಗೊಳಿಸುವ ಆಲೋಚನೆ ಪಕ್ಷಕ್ಕಿಲ್ಲವೆಂದೂ ಬ್ಯಾಂಕು ಠೇವಣಿಗಳ ವಿತರಣೆಯನ್ನು ಹತೋಟಿಗೊಳಿಸುವ ಮಾರ್ಗಗಳನ್ನು ಕುರಿತು ಅದು ಆಲೋಚಿಸುತ್ತಿದೆಯೆಂದೂ ಕಂಡುಬರುವುದು.