ರಾಜಗೋಪಾಲನಗರದ ಶಿವಕುಮಾರ್ ಅಲಿಯಾಸ್ ಕಾಗೆ ಶಿವ (29), ನಂದಿನಿಲೇಔಟ್ನ ಎ.ಎಂ.ಅರುಣ್ (29) ಹಾಗೂ ಪೀಣ್ಯದ ಅರುಣ್ ಅಲಿಯಾಸ್ ಆರ್ಎಂಸಿ (24) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ, ಚಂದ್ರಾಲೇಔಟ್, ರಾಜರಾಜೇಶ್ವರಿನಗರ ಹಾಗೂ ಅನ್ನಪೂರ್ಣೇಶ್ವರಿನಗರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 17 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.