ವಿಜಯಪುರ: ಧೈರ್ಯ, ಸಾಹಸದಿಂದ ಭಾರತದಲ್ಲಿ ಪ್ರಥಮ ಹಿಂದೂ ಸಾಮ್ರಾಜ್ಯ ಸ್ಥಾಪಿಸಿದವರು ಶಿವಾಜಿ ಪ್ರಥಮರು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ಎಸ್) ತುಮಕೂರು ವಿಭಾಗದ ಶಾರೀರಿಕ ಪ್ರಮುಖ ಮು.ವ.ವೆಂಕಟೇಶ್ ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ, ಭಾನುವಾರ ಆಯೋಜಿಸಿದ್ದ ‘ಹಿಂದೂ ಸಾಮ್ರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪರಕೀಯರ ನೂರಾರು ದಾಳಿಗಳಿಂದ ಭಾರತ ದೇಶವು ಸಾಕಷ್ಟು ನಲುಗಿದೆ. ಇಲ್ಲಿನ ಆಧ್ಯಾತ್ಮಿಕತೆ, ಸಂಸ್ಕೃತಿ, ಸಂಸ್ಕಾರದಿಂದ ಶ್ರೀಮಂತವಾಗಿರುವ ಭಾರತ ಮುಂದೊಂದು ದಿನ ಪ್ರಪಂಚದ ನೇತಾರನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಕೋಟಿ ವೃಕ್ಷ ಅಭಿಯಾನದಲ್ಲಿ ಭಾಗವಹಿಸಿದ್ದ ಜನರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು.
ಜಿಲ್ಲಾ ಕಾರ್ಯವಾಹ ಮುನೇಶ್, ದೇವನಹಳ್ಳಿ ತಾಲ್ಲೂಕು ಕಾರ್ಯವಾಹ ಪ್ರದೀಪ್, ತಾಲ್ಲೂಕು ಬೌದ್ಧಿಕ ಪ್ರಮುಖ ಮಹೇಶ್, ಸೇವಾ ಪ್ರಮುಖ ರಮೇಶ್ ಬಾಬು, ನಗರ ಕಾರ್ಯವಾಹ ಲೋಕೇಶ್, ಮಹೇಶ್, ರವಿಕುಮಾರ್, ಪಾಂಡು, ಚಂದ್ರಕುಮಾರ್, ಬಾಬು ಹಾಜರಿದ್ದರು.