ಗ್ರಾಮಸ್ಥರ ಸಭೆ: ಮಾಧ್ಯಮಗಳಲ್ಲಿ ವಿಡಿಯೊ ಪ್ರಸಾರವಾಗುತ್ತಿದ್ದಂತೆ ಎಚ್ಚರ ಗೊಂಡ ಪೊಲೀಸರು, ಸೋಮವಾರ ಗ್ರಾಮದಲ್ಲಿ ಸಭೆ ನಡೆಸಿದರು. ‘ಕಾವೇರಿ ತೀರದಲ್ಲಿರುವ ನಿಸರ್ಗ ಧಾಮದಲ್ಲಿ ಅಂತ್ಯಕ್ರಿಯೆ ನಡೆಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಹಾಗೂ ಜಿಲ್ಲಾಧಿ ಕಾರಿ ಡಿ.ರಂದೀಪ್ ಸೂಚಿಸಿದ್ದಾರೆ’ ಎಂದು ಎಎಸ್ಐ ರಮೇಶ್ ಸಭೆಯಲ್ಲಿ ತಿಳಿಸಿದರು.