‘ಪುರಸಭಾ ಮುಖ್ಯಾಧಿಕಾರಿಗೆ ಮನವಿ ಮಾಡಿ, ವಾರ್ಡಿನಲ್ಲಿರುವ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರು ನೋಡೋಣವೆಂಬ ಹಾರಿಕೆ ಉತ್ತರ ನೀಡಿ ಕಡೆಗಣಿಸಿದ್ದಾರೆ. ನಾನು ಪಕ್ಷೇತರನಾಗಿ ಆಯ್ಕೆಯಾಗಿರುವ ಸದಸ್ಯನೆಂಬ ಕಾರಣಕ್ಕಾಗಿ ಕಡೆಗಣಿಸಲಾಗುತ್ತಿದೆ’ ಎಂದರು. ‘ಕೂಡಲೇ ನ್ಯಾಯ ಒದಗಿಸದಿದ್ದರೆ ಪುರಸಭೆಯ ಮುಂಭಾಗದಲ್ಲಿ ವಾರ್ಡಿನ ಜನರೊಂದಿಗೆ ಹೋರಾಟ ಆರಂಭಿಸುತ್ತೇನೆ’ ಎಂದು ತಿಳಿಸಿದ್ದಾರೆ.