ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಸಿ.ಎಸ್. ನಾಡಗೌಡ, ಸುಕ್ಷೇತ್ರ ಯಲಗೂರು ಆಂಜನೇಯ ದೇವಸ್ಥಾನದಿಂದ ಇಡೀ ರಾಜ್ಯದಾದ್ಯಂತ ಪ್ರಸಿದ್ಧವಾಗಿದ್ದು, ಇಲ್ಲಿ ಬಂದ ಭಕ್ತರಿಗೆ ವಸತಿ ಸೌಕರ್ಯದ ಕೊರತೆಯಿತ್ತು, ಅದಕ್ಕಾಗಿ ವಿವಿಧ ಶಾಸಕರ, ವಿಧಾನ ಪರಿಷತ್, ರಾಜ್ಯಸಭಾ ಸದಸ್ಯರ, ಸಂಸದ ರನ್ನು ಸಂಪರ್ಕಿಸಿ ಅವರಿಂದ ₹ 56 ಲಕ್ಷ ಅನುದಾನವನ್ನು ಪಡೆಯಲಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ₹ 50 ಲಕ್ಷ ಅನುದಾನ ಬಂದಿದೆ. ಒಟ್ಟಾರೆ ₹ 106 ಲಕ್ಷ ವೆಚ್ಚದಲ್ಲಿ ಈ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದರು.