ಚಿತ್ರದ ಐದು ಹಾಡುಗಳಿಗೆ ಇಳಯರಾಜ ಅವರ ಪುತ್ರ ಯುವನ್ ಶಂಕರ್ ರಾಜ ಸಂಗೀತ ನೀಡಿದ್ದಾರೆ. ಈ ಮೂಲಕ ಅವರು ಕೂಡ 'ಚಂದನವನ'ಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವವರು ಸತೀಶ್ ರೆಡ್ಡಿ. ಇವರ ಜೊತೆ ರಮೇಶ್ ಶಿವ, ಸತ್ಯನ್.ಎಸ್.ಪಿ ಕೈಜೋಡಿಸಿದ್ದಾರೆ. ಸಿಹಿಕಹಿ ಚಂದ್ರು, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ದೀಪಕ್ ಶೆಟ್ಟಿ, ಕಡ್ಡಿಪುಡಿ ಚಂದ್ರು, ಎಂ.ಎನ್.ಲಕ್ಷ್ಮೀದೇವಿ, ಎಂ.ಎನ್. ಸುರೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.